ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ರಾಮ ಮಂಟಪ ಸಮೀಪದ ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ.
ಸೋಮವಾರ ಮಧ್ಯಾಹ್ನ ಈಜಲು ಹೋದ ತುಂಗಾ ಕಾಲೇಜು ವಿದ್ಯಾರ್ಥಿ ಅರಳ ಸುರಳಿಯ ಬಂದ್ಯಾದ ವರ್ಧನ್ (19), ಸೊನಾಲೆ ಸಮೀಪದ ಎಲೆಕ್ಟ್ರಾನಿಕ್ ಅಂಗಡಿ ಕೆಲಸಗಾರ ಮಂಜು (20) ಎಂಬುವವರು ನೀರು ಪಾಲಾಗಿದ್ದಾರೆ.
READ | ಮಾರಿಕಾಂಬ ಜಾತ್ರೆ, ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗದ ವ್ಯವಸ್ಥೆ
ಮೊಬೈಲ್ ಲೊಕೇಷನ್ ಆಧಾರದ ಮೇಲೆ ಹುಡುಕಾಟ
ನೀರಿನಲ್ಲಿ ಈಜಲು ಹೋದ ಇಬ್ಬರು ಯುವಕರ ಹುಡುಕಾಟ ನಡೆಯುತ್ತಿದೆ. ಇದಕ್ಕಾಗಿ ಮೊಬೈಲ್ ಲೊಕೇಷನ್ ಆಧಾರದ ಮೇಲೆ ಹುಡುಕಾಟ ನಡೆಯುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಯುತ್ತಿದ್ದು, ಸ್ಥಳದಲ್ಲಿ ಯುನಿಫಾರ್ಮ್, ಮೊಬೈಲ್ ಪತ್ತೆಯಾಗಿದೆ.