ಸುದ್ದಿ ಕಣಜ.ಕಾಂ | DISTRICT | KANNADA SAHITYA SAMMELANA
ಶಿವಮೊಗ್ಗ: ಗೋಪಿಶೆಟ್ಟಿಕೊಪ್ಪದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಮಾರ್ಚ್ 30 ಮತ್ತು 31ರಂದು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.
ನಗರದಲ್ಲಿ ಶುಕ್ರವಾರ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಸಂಶೋಧಕ ಡಾ.ಕೆಳದಿ ಗುಂಡಾ ಜೋಯ್ಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಯಾವ ದಿನ ಏನೇನು ಕಾರ್ಯಕ್ರಮ?
- ಮಾರ್ಚ್ 30ರಂದು ಬೆಳಗ್ಗೆ 10 ಗಂಟೆಗೆ ಗೋಪಾಳದ ಸರ್ಕಾರಿ ಶಾಲೆಯಲ್ಲಿ ಸಮ್ಮೇಳನಾಧ್ಯಕ್ಷರು ಪುಸ್ತಕ ವಿತರಣೆ ಮಾಡುವರು. ನಂತರ ರಾಜಬೀದಿ ಉತ್ಸವ ನಡೆಯುವುದು. ಸಮ್ಮೇಳನ ನಡೆಯುವ ಸಾಹಿತ್ಯ ಗ್ರಾಮಕ್ಕೆ ಕರೆತರಲಾಗುವುದು
- ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಉತ್ಸವಕ್ಕೆ ಚಾಲನೆ ನೀಡುವರು. ಇದಕ್ಕೂ ಮುನ್ನ 9.30 ಗಂಟೆಗೆ ಧ್ವಜಾರೋಹಣ.
- ಬೆಳಗ್ಗೆ 10 ಗಂಟೆಗೆ ಗಮಕ ಸುಗಮ ಸಂಗೀತ. ಹೊಸನಗರದ ಅನುಪಮ ಸುರೇಶ್, ಡಾ. ರಾಜೇಂದ್ರ ತಗಡ್ಲಿ ಕಾರ್ಯಕ್ರಮ ನಿರ್ವಹಣೆ
- 10.30ಕ್ಕೆ ಹಣತೆ ಹಚ್ಚೋಣ ಬನ್ನಿ ವೇದಿಕೆ ಕಾರ್ಯಕ್ರಮ ಆರಂಭ. ಡಿ.ಮಂಜುನಾಥ ಆಶಯ ಭಾಷಣ. ಸಾಹಿತಿ ಕೃಷ್ಣೇಗೌಡ, ಹಿಂದಿನ ಸಮ್ಮೇಳನಾಧ್ಯಕ್ಷೆ ಡಾ. ವಿಜಯದೇವಿ ಭಾಗಿ. ಗೃಹ ಸಚಿವ ಆರಗ ಜ್ಞಾನೇಂದ್ರ ಪುಸ್ತಕ ಬಿಡುಗಡೆ ಮಾಡುವರು. ಸಂಸದ ಬಿ.ವೈ. ರಾಘವೇಂದ್ರ ಅವರಿಂದ ಪುಸ್ತಕ ಪ್ರದರ್ಶನಕ್ಕೆ ಚಾಲನೆ. ಕ.ಸಾ.ಪ. ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
- ಮಧ್ಯಾಹ್ನ 2.30ಕ್ಕೆ ಮೊದಲ ಗೋಷ್ಠಿಯಲ್ಲಿ `ಹಾಲುಹಳ್ಳ ಹರಿಯಲಿ’ ಎಂಬ ವಾಕ್ಯದೊಡನೆ ಕವಿಗೋಷ್ಠಿ ಆಯೋಜನೆ ಮಾಡಲಾಗಿದೆ.
- 4.30 ಗಂಟೆಗೆ ಎರಡನೇ ಗೋಷ್ಠಿ ಸಮ್ಮೇಳನ `ಅಧ್ಯಕ್ಷರ ಬದುಕು-ಬರಹ’ ಇರಲಿದೆ. ಡಾ. ಕೆ.ಜಿ. ವೆಂಕಟೇಶ್, ಡಾ. ಕೆಳದಿ ಗುಂಡಾ ಜೋಯ್ಸ್ ಅವರ ಸಾಹಿತ್ಯ ಕೃತಿಗಳ ಅವಲೋಕಿಸುವರು.
- ಸಂಜೆ 6 ಗಂಟೆಗೆ ಮೂರನೇ ಗೋಷ್ಠಿಯಲ್ಲಿ `ರಾಷ್ಟ್ರೀಯ ಶಿಕ್ಷಣ ನೀತಿ- ಕನ್ನಡ’ ವಿಷಯವನ್ನು ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ. ರಾಮಲಿಂಗಪ್ಪ ಬೇಗೂರು ಮಂಡಿಸುವರು. ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅಧ್ಯಕ್ಷತೆ
- ಮಾರ್ಚ್ 31ರಂದು ಬೆಳಗ್ಗೆ 10.30 ಗಂಟೆಗೆ ನಾಲ್ಕನೇ ಗೋಷ್ಠಿ ಹೊಸ ಓದು, ಹೊಸ ದನಿ ಕುರಿತು ನಡೆಯಲಿದೆ. ಭದ್ರಾವತಿಯ ದೀಪ್ತಿ, ಡಾ. ಶಿವಲಿಂಗೇಗೌಡ, ಡಾ. ಅರಡಿ ಮಲ್ಲಯ್ಯ, ಡಾ. ಪುರುಷೋತ್ತಮ ಭಾಗಿ.
- ಐದನೇ ಗೋಷ್ಠಿ ಮಧ್ಯಾಹ್ನ 12.30ಕ್ಕೆ ಆರಂಭ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್. ನಾಗಭೂಷಣ್ ಅವರ ಗಾಂಧಿ ಕಥನ ಕುರಿತು ಡಾ. ಸಿರಾಜ್ ಅಹ್ಮದ್ ಮತ್ತು ಡಾ, ಮೌಲಾನಾ ಹಂಜಾದ್ ಹುಸೇನ್ ಕುರಿತು ಡಾ. ಮೋಹನ್ ಚಂದ್ರಗುತ್ತಿ ಸ್ಪಂದನೆ ನೀಡುವರು.
- 2.30ಕ್ಕೆ ಗೋಷ್ಠಿ 6ರಲ್ಲಿ ಕವಿಗೋಷ್ಠಿ ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಮಾರ್ಷನ್ ಶರಾಮ್ ವಹಿಸುವರು.
- ಸಂಜೆ 4.30ಕ್ಕೆ ಡಾ. ಶ್ರೀಪತಿ ಹಳಗುಂದ ಅವರ ಹೊಸ ಕೃತಿಗಳ ಪುಸ್ತಕ ಅವಲೋಕನ ಗೋಷ್ಠಿ 7ರಲ್ಲಿ ನಡೆಯಲಿದೆ. ಪ್ರಾಧ್ಯಾಪಕ ಡಾ. ರತ್ನಾಕರ ಸಿ.ಕುನುಗೋಡು ಪುಸ್ತಕ ಕುರಿತು ಮಾತನಾಡುವರು.
- ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಾಗರದ ಸಾಹಿತಿ ಡಾ. ನಾ.ಡಿಸೋಜಾ ಸಮಾರೋಪ ನುಡಿಗಳನ್ನಾಡುವರು. ಸಮ್ಮೇಳನಾಧ್ಯಕ್ಷ ಡಾ. ಕೆಳದಿ ಗುಂಡಾ ಜೋಯ್ಸ್ ಅವರನ್ನು ಸಚಿವ ಕೆ.ಎಸ್.ಈಶ್ವರಪ್ಪ ಅಭಿನಂದಿಸುವರು.
- ಸಂಜೆ 7 ಗಂಟೆಗೆ ಗಾನ ಸುಧೆ ಕಾರ್ಯಕ್ರಮ. ಕೆ.ಯುವರಾಜ, ಕಾಶಿಬಾಯಿ ಜನಪದಗೀತೆ, ಭಾವಗೀತೆ ಹಾಡುವರು. ಸಾಹಿತಿಗಳು ಭಾಗವಹಿಸಲಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್. ಶಿವಮೂರ್ತಿ, ತಾಲ್ಲೂಕು ಅಧ್ಯಕ್ಷೆ ಮಹಾದೇವಿ, ಪ್ರಮುಖರಾದ ಕೃಷ್ಣಮೂರ್ತಿ, ರತ್ನಯ್ಯ, ಶಿವಪ್ಪ ಇತರರು ಉಪಸ್ಥಿತರಿದ್ದರು.