ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಸೊರಬ ತಾಲ್ಲೂಕಿನ ಬನವಾಸಿ ಮುಖ್ಯ ರಸ್ತೆಯಲ್ಲಿಯ ಚಿತ್ರಟ್ಟಿಹಳ್ಳಿ ಕ್ರಾಸ್ ಹತ್ತಿರ ಟಾಟಾ ಏಸ್ ವಾಹನ ಮರಕ್ಕೆ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ.
ತಿಮ್ಮಪ್ಪ(45), ಯೋಗರಾಜ್ (55) ಮತ್ತು ಆಕಾಶ್ (15) ಅವರಿಗೆ ಗಂಭೀರ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಉಳಿದ 11 ಜನರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸೊರಬ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
READ | ಶಿವಮೊಗ್ಗ, ದಾವಣಗೆರೆಯಲ್ಲಿ ಬೈಕ್ ಕಳವು ಮಾಡಿದ ಆರೋಪಿ ಬಂಧನ, ಲಕ್ಷಾಂತರ ಮೌಲ್ಯದ ಬೈಕ್ ಸೀಜ್
ಮರಕ್ಕೆ ಡಿಕ್ಕಿಹೊಡೆದು ಪಲ್ಟಿ
ಸಾಗರ ತಾಲ್ಲೂಕಿನ ಗುತ್ನಳ್ಳಿ ಗ್ರಾಮದ ಮಾರಿಜಾತ್ರೆಗೆ ಹೋಗಲು ತವನಂದಿ ಗ್ರಾಮದ ನಿವಾಸಿಗಳಾದ ತಿಮ್ಮಪ್ಪ, ಯೋಗರಾಜ್, ಆಕಾಶ್ ಮತ್ತು ಇತರೆ 11 ಜನರು ಸೇರಿಕೊಂಡು ತವನಂದಿ ಗ್ರಾಮದ ಹನುಮಂತಪ್ಪ ಅವರಿಗೆ ಟಾಟಾ ಏಸ್ ವಾಹನವನ್ನು ಬಾಡಿಗೆ ಮಾಡಿಕೊಂಡು ಜಾತ್ರೆಗೆ ಹೋಗಿದ್ದಾರೆ. ಗುರುವಾರ ಬೆಳಗಿನ ಜಾವ 1 ಗಂಟೆ ಸಮಯದಲ್ಲಿ ವಾಪಾಸ್ ಬರುವಾಗ ವಾಹನದ ಚಾಲಕನಾದ ಹನುಮಂತಪ್ಪ ಬನವಾಸಿ ಮುಖ್ಯ ರಸ್ತೆಯಲ್ಲಿನ ಚಿತ್ರಟ್ಟಿಹಳ್ಳಿ ಕ್ರಾಸ್ ಹತ್ತಿರ ಟಾಟಾ ಏಸ್ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡ ಭಾಗದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ವಾಹನವು ಪಲ್ಟಿಯಾಗಿದೆ.