ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ಬಹುತೇಕ ಎಲ್ಲ ರಸ್ತೆಗಳನ್ನು ಅಗೆದು ಬಿಡಲಾಗಿದೆ. ರಸ್ತೆಯ ಮಧ್ಯೆ ಪೈಪ್ ಲೈನ್ ಗಾಗಿ ಅಗೆದು ಮಣ್ಣು ಮುಚ್ಚಲಾಗಿದೆ. ಇದರಿಂದಾಗಿ, ಗುಂಡಿಗಳು ನಿರ್ಮಾಣವಾಗಿವೆ.
ತಿಲಕ್ ನಗರ, ಗಾಂಧಿನಗರ, ಜೈಲು ರಸ್ತೆ, ರವೀಂದ್ರನಗರ, ಗೋಪಾಳ, ಚೆನ್ನಪ್ಪ ಲೇಔಟ್, ಎಎನ್.ಕೆ ರಸ್ತೆ, ಹೊಸಮನೆ ಹೀಗೆ ಎಲ್ಲ ಕಡೆಗಳಲ್ಲಿ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು, ವಾಹನ ಸಂಚಾರವೇ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಅಪ್ಪತಪ್ಪಿ ವೇಗವಾಗಿ ವಾಹನ ಸಂಚರಿಸಿದ್ದಲ್ಲಿ ಸಂಚಕಾರ ತಪ್ಪಿದ್ದಲ್ಲ.
ಇಷ್ಟಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಇದರೆಡೆಗೆ ಗಮನವೇ ಹರಿಸುತ್ತಿಲ್ಲ. ಕನಿಷ್ಠ ಪಕ್ಷ ಗುಂಡಿಗಳನ್ನಾದರೂ ಸರಿಯಾಗು ಮುಚ್ಚಬೇಕಿತ್ತು. ಅದನ್ನೂ ಮಾಡಿಲ್ಲ. ಇದರೆಡೆಗೆ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು.
– ರಾಜೇಶ್, ಶಿವಮೊಗ್ಗ ನಿವಾಸಿ
https://www.suddikanaja.com/2021/01/24/shivamogga-gandhi-bazar-fire-accident-loss/