ಸುದ್ದಿ ಕಣಜ.ಕಾಂ | KARNATAKA | AGRICULTURE
ಶಿವಮೊಗ್ಗ: ಆರೋಗ್ಯಕರ ಪೇಯವಾಗಿರುವ ‘ನೀರಾ’ವನ್ನು ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಮಾರಾಟ ಆರಂಭ ಮಾಡಲಾಗಿದೆ ಎಂದು ಮಲೆನಾಡು ನಟ್ಸ್ ಆ್ಯಂಡ್ ಸ್ಪೈಸ್ ಪ್ರೊಡ್ಯೂಸರ್ಸ್ ಕಂಪನಿಯ ಅಧ್ಯಕ್ಷ ಮನೋಹರ ಮಸ್ಕಿ ಹೇಳಿದರು.
ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾ ಭಾರತೀಯ ಆಹಾರ ಪದ್ಧತಿಯ ಒಂದು ಭಾಗವಾಗಿದೆ. ಆದರೆ, ಸರ್ಕಾರ ಕೆಲವು ಕಾಲ ಇದಕ್ಕೆ ನಿಷೇಧ ಹೇರಿತ್ತು. ಹೀಗಾಗಿ ನೀರಾ ಬೆಳೆಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ರೈತರ ಹೋರಾಟದಿಂದಾಗಿ ನಿಷೇಧ ಹಿಂಪಡೆಯಲಾಗಿದೆ ಎಂದರು.
ಭದ್ರಾವತಿಯಲ್ಲಿ ನೀರಾ ಸಂಸ್ಕರಣಾ ಘಟಕ
ರೈತ ಉತ್ಪಾದಕ ಸಂಸ್ಥೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ನಮ್ಮ ಸಂಸ್ಥೆ ಮೊದಲ ಬಾರಿಗೆ ನೀರಾ ಸಂಸ್ಕರಣಾ ಘಟಕವನ್ನು ಭದ್ರಾವತಿ ತಾಲೂಕಿನ ಬಾರಂದೂರಿನಲ್ಲಿ ಸ್ಥಾಪಿಸಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ನೀರಾ ಮಾರಾಟ ಮಳಿಗೆಯನ್ನು ಆರಂಭಿಸಿದೆ.
ಬಾರಂದೂರಿನಲ್ಲಿ ಪ್ರತಿದಿನ ನಾಲ್ಕು ಸಾವಿರ ಲೀಟರ್ ಸಾಮರ್ಥ್ಯದ ನೀರಾ ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ಪರಿಶುದ್ಧ ನೀರಾವನ್ನು ಪೂರೈಕೆ ಮಾಡಲಾಗುತ್ತಿದೆ. ಆಲ್ಕೋಹಾಲ್ ಆಗಿ ಪರಿವರ್ತನೆ ಆಗದಂತೆ ನೋಡಿಕೊಂಡು ಉತ್ಪಾದನೆ ಮಾಡಲಾಗುತ್ತಿದೆ. ಇದು ಮಧುಮೇಹಿ ಸ್ನೇಹಿಯಾಗಿದ್ದು, ಸೇವನೆ ಮಾಡಬಹುದು ಎಂದರು.
READ | ನಿರ್ಜನ ಪ್ರದೇಶದಲ್ಲಿ ಮಹಿಳೆ ರೇಪ್ ಮಾಡಿದ್ದ ಆರೋಪಿಗೆ 10 ವರ್ಷ ಜೈಲು
ನೀರಾ ಉತ್ಪಾದನೆಯೊಂದಿಗೆ ಉದ್ಯೋಗ ಸೃಷ್ಟಿ
ನೀರಾದಿಂದ ರೈತನಿಗೆ ಆದಾಯ ಕೂಡ ಲಭಿಸುತ್ತದೆ. ಇದರೊಂದಿಗೆ, ಉದ್ಯೋಗ ಸೃಷ್ಟಿಯಲ್ಲೂ ಅನುಕೂಲವಾಗಿದೆ. ಒಂದು ತೆಂಗಿನ ಮರಕ್ಕೆ ಒಂದು ವರ್ಷಕ್ಕೆ ಸಾವಿರ ರೂ. ಆದಾಯ ಇದ್ದರೆ, ನೀರಾದಿಂದ ಒಂದು ಮರಕ್ಕೆ ತಿಂಗಳಿಗೆ ₹900 ಆದಾಯವನ್ನು ರೈತ ಪಡೆಯುತ್ತಾನೆ. ಜೊತೆಗೆ ಕೃಷಿ ಕೆಲಸಗಾರರೂ, ನೀರಾ ಟೆಕ್ನಿಷಿಯಲ್ ಆಗಿ ಕೆಲಸ ಮಾಡುವವರು ಸುಮಾರು 35 ಸಾವಿರಕ್ಕೂ ಹೆಚ್ಚು ಆದಾಯ ತಿಂಗಳಿಗೆ ಗಳಿಸುತ್ತಾರೆ ಎಂದು ತಿಳಿಸಿದರು.
ಗಾಂಧಿನಗರದಲ್ಲಿ ನೀರಾ ಮಾರಾಟ ಮಳಿಗೆ
ಶಿವಮೊಗ್ಗದ ಗಾಂಧಿ ನಗರದಲ್ಲಿ ನೀರಾ ಮಾರಾಟ ಮಳಿಗೆ ಆರಂಭವಾಗಿದ್ದು, ಸಾರ್ವಜನಿಕರು ನೀರಾವನ್ನು ಸೇವಿಸುವುದರ ಮೂಲಕ ರೈತರಿಗೂ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು. ಮಂಜುನಾಥ್ ಉಪಸ್ಥಿತರಿದ್ದರು.
https://www.suddikanaja.com/2021/05/14/banana-stem-entrepreneur/